ಹೇಗಿದೆ ನಮ್ಮ ಇವತ್ತಿನ ಸ್ವಾತಂತ್ರ್ಯ???
* ಕರ್ನಾಟಕಕ್ಕೆ ತನ್ನದೇ ಆದ ನದಿಗಳ ಮೇಲೆ ಆಡಳಿತ ಸಾಧ್ಯವಿಲ್ಲ .
* ಕನ್ನಡ, ಕರ್ನಾಟಕದಲ್ಲಿ ಸ್ಥಳೀಯವಾಗಿ ರಚಿಸಿದ ಉದ್ಯೋಗಿಗಳು ಯಾವುದೇ ಮೀಸಲಾತಿ ಹೊಂದುವ ಸೌಲಭ್ಯವಿಲ್ಲ .
* ಕರ್ನಾಟಕದಲ್ಲಿ ಕನ್ನಡದಲ್ಲಿ ನಂಬರ್ ಪ್ಲೇಟ್ ಇರುವ ವಾಹನಗಳ ಮೇಲೆ ದಂಡ ಹಾಕುತ್ತಾರೆ .
* ಕನ್ನಡ, ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಕೃತ ಭಾಷೆ ಇರುವಂತಿಲ್ಲ .
* ಕರ್ನಾಟಕ ಧ್ವಜ ಕಾನೂನು ಪ್ರಕಾರ ಸರಕಾರೀ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕನ್ನಡದ ಧ್ವಜ ಹಾರಿಸುವುದು ಕಡ್ಡಾಯವಲ್ಲ .
* ಕರ್ನಾಟಕ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸ್ಥಳಗಳಲ್ಲಿ ಬೇರೆಯವರ ಹೆಸರು ಅಂದರೆ, ರಾಷ್ಟ್ರೀಯ ನಾಯಕರ ಹೆಸರುಗಳನ್ನಿಡುತ್ತಾರೆಯೇ ಹೊರತು ಕನ್ನಡದವರ, ಕನ್ನಡಿಗರ ಹೆಸರುಗಳನ್ನಿಡುವುದಿಲ್ಲ .
* ಬ್ಯಾಂಕುಗಳು, ಪೋಸ್ಟ್ ಆಫಿಸ್ಗಳಲ್ಲಿ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಹಿಂದಿ ಮತ್ತು ಇಂಗ್ಲೀಷಿಗೆ ಪ್ರಾಮುಖ್ಯತೆ ಕೊಡುತ್ತವೆಯೇ ಹೊರತು ಕನ್ನಡಕ್ಕಲ್ಲ .
* ರೈಲ್ವೆ ಸಂಸ್ಥೆ ಲಾಭ ಮಾಡುತ್ತದೆ ಆದರೆ ತನ್ನ ಟಿಕೇಟಲ್ಲಿ ಕನ್ನಡದಲ್ಲಿ ಮಾಹಿತಿ ಕೇಳಿದರೆ ಹಣದ ಕೊರತೆ ಇರುವುದರಿಂದ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ, ಮತ್ತು ಬೋಗಿಗಳ ಒಳಾಂಗಣದಲ್ಲಿ ಕನ್ನಡ ಇಲ್ಲದ ತುರ್ತು ಸೂಚನೆಗಳು .
* ಗ್ಯಾಸ್ ಸಿಲಿಂಡರ್ ಕನ್ನಡದಲ್ಲಿ ಯಾವುದೇ ಸುರಕ್ಷತಾ ಸೂಚನೆಗಳನ್ನು ಕೊಡುವುದಿಲ್ಲ.
ಗೆಳೆಯರೇ, ಇದು ಕೇವಲ ಸ್ಯಾಂಪಲ್ ಅಷ್ಟೇ. ಕರ್ನಾಟಕದಲ್ಲಿ, ಕನ್ನಡಿಗರ ಮೇಲೆ ಎಂಥಾ ದೌರ್ಜನ್ಯ ನಡೆಯುತ್ತಿದೆಯೆಂದರೆ ಅಕ್ಕ ಪಕ್ಕ ರಾಜ್ಯದವರು ಇದನ್ನು ನೋಡಿ ನಗುತ್ತಿದ್ದಾರೆ, ನಮ್ಮ ದೌರ್ಬಲ್ಯ ಎಂದುಕೊಂಡು ನಮ್ಮ ನಾಡಲ್ಲೇ ಹತ್ತಾರು ವರ್ಷಗಳಿಂದ ಇದ್ದುಕೊಂಡು ನಮಗೇ ಗೊತ್ತಿಲ್ಲದಹಾಗೆ ಸರಕಾರ ಕೊಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಾ ನಮಗಿಲ್ಲದ ಹಾಗೆ ಮಾಡಿದ್ದಾರೆ. ಇದು ನಮ್ಮ ದುರ್ವಿಧಿಯೇ ಸರಿ.
ಇನ್ನು ಮುಂದಾದರೂ ಕನ್ನಡಿಗರು ನಾವು ನಮ್ಮತನವನ್ನು ತೋರಿಸೋಣ, ನಮ್ಮ ಸವಲತ್ತುಗಳನ್ನು ನಮ್ಮದಾಗಿಸಿಕೊಳ್ಳೋಣ. ನಾವು ಬೆಳೆದ ಪದಾರ್ಥ ಬೇರೆಯವರ ಪಾಲಾಗದಂತೆ ಕಾಯೋಣ. ಇದು ನಮ್ಮ ಆದ್ಯ ಕರ್ತವ್ಯವಾಗಿದೆ ಮತ್ತು ಅನುಸರಿಸಿ ಮಾಡಲೇಬೇಕಿದೆ.
ಸ್ವಲ್ಪ ಯೋಚಿಸಿ ನೋಡಿ.
ವಂದನೆಗಳೊಂದಿಗೆ,
ಗೆಳೆಯ,
ಮೋಹನ್ ಕುಮಾರ್ ಡಿ ಎನ್
೧೬-೦೮-೨೦೧೩

No comments:
Post a Comment