"ಹೊನ್ನ ಕಣಜ"
ಈ ಕೆಳಕಾಣಿಸಿದ ಮಹಾನುಭಾವರ ಅಪೂರ್ವ ಕಥೆಯನ್ನು ಓದಬಹುದು.
1. ಬಿ ಸಿ ರಾಮಚಂದ್ರ ಶರ್ಮ
2. ಸಮೇತನಹಳ್ಳಿ ರಾಮರಾಯ
3. ಪೂರ್ಣಚಂದ್ರ ತೇಜಸ್ವಿ
4. ಭಾರತೀಸುತ
5. ಸುಮತೀಂದ್ರ ನಾಡಿಗ
6. ವೀರಭದ್ರ
7. ಜಿ ಕೆ ಗೋವಿಂದರಾವ್
8. ಸುಧಾಕರ
9. ಪಿ ವಿ ನಂಜರಾಜ ಅರಸು
10. ಬೆಸಗರಗಳ್ಳಿ ರಾಮಣ್ಣ
11. ಪಿ ಲಂಕೇಶ್
12. ಟಿ ಎನ್ ಕೃಷ್ಣರಾಜು
13. ಶ್ರೀಕೃಷ್ಣ ಆಲನಹಳ್ಳಿ
14. ಗೋಪಾಲಕೃಷ್ಣ ಮಧ್ಯಸ್ಥ
15. ಶ್ರೀಕಾಂತ
16.ಕಮಲಾ ಸುಬ್ರಮಣ್ಯಂ
17. ಎಸ್ ದಿವಾಕರ್
18. ವೈದೇಹಿ
19. ಜಯಂತ ಕಾಯ್ಕಿಣಿ
20. ಕಾಳೇಗೌಡ ನಾಗವಾರ
21. ಬೋಳುವಾರು ಮಹಮದ್ ಕುಂಯಿ
22. ಕೆ ಟಿ ಗಟ್ಟಿ
23. ವಿವೇಕ ಶಾನಭಾಗ
24. ದೇಶಪಾಂಡೆ ಸುಬ್ಬರಾಯ
25. ಅಬ್ದುಲ್ ರಶೀದ್
26. ಅಶೋಕ ಹೆಗಡೆ
27. ಎಂ ಎಸ್ ಶ್ರೀರಾಮ್
28. ಮೊಗಳ್ಳಿ ಗಣೇಶ್
29. ಅಮರೇಶ ನುಗಡೋಣಿ
30. ರಾಜೇಂದ್ರ ಚಿನ್ನಿ
31. ಸಿ ಬಸವಲಿಂಗಯ್ಯ
32. ರಾಮಚಂದ್ರದೇವ
33. ಕಲಿಗಣನಾಥ ಗುಡದೂರು
34. ಜಯಶ್ರೀ ದೇಶಪಾಂಡೆ
35. ನಾಗವೇಣಿ ಹೊನ್ನಕಟ್ಟಿ
36. ಡಾ. ನಾ ಮೊಗಸಾಲೆ
37. ಬಿ ಎಲ್ ವೇಣು
38. ಮಂಜುನಾಥ್ ಲತಾ
39. ಅಲಕ ತೀರ್ಥಹಳ್ಳಿ
40. ಡಾ. ವಿನಯಾ
41. ಕಸ್ತೂರಿ ಎಸ್ ಬಾಯಿರಿ
42. ನಾಗಮಂಗಲ ಕೃಷ್ಣಮೂರ್ತಿ
43. ಕವಿತಾ ರೈ
44. ಟಿ ಕೆ ದಯಾನಂದ
45. ಅಲಕಾ ಕೆ
46. ಮಹಾಂತೇಶ ನವಲಕಲ್
47. ರಶ್ಮಿ ಕೆ ಎಂ
48. ಕೆ ಎ ಶಾಂತಿ
49. ಪಜ್ಞಾ ಮತ್ತಿಹಳ್ಳಿ
50. ರಾಜು ಹೆಗಡೆ
ನಮಸ್ಕಾರ
ಮೋಹನ್ ಕುಮಾರ್ ಡಿ ಎನ್
https://www.facebook.com/photo.php?fbid=1467976779957169&set=gm.1536931986374253&type=3&theater&ifg=1
ನೀವು ಹಿಂದಿನ ಶತಮಾನದ ಮಧ್ಯಂತರ ಕಾಲದಿಂದ ಇಂದಿನವರೆಗೂ ಮೂಡಿಬಂದ ಅಪರೂಪದ ಸಣ್ಣಸಣ್ಣ ಕಥೆಯನ್ನು ಓದಬೇಕಿದ್ದರೆ ಅದಕ್ಕಾಗಿ ಎಲ್ಲಿಯೂ ತಡಕಾಡಬೇಕಿಲ್ಲ, "ಪ್ರಜಾವಾಣಿ" ಹೊರತಂದಿರುವ "ಹೊನ್ನ ಕಣಜ" ಎನ್ನುವ ಬೃಹತ್ಕಥಾ ಮಾಲಿಕೆಯನ್ನು ಓದಿದರಾಯಿತು. ಹೆಸರಿಗೆ ತಕ್ಕಂತೆ ಇದೊಂದು ಹೊನ್ನ..ಹೊನ್ನಿಗಿಂತಲೂ ಮಿಗಿಲಾದ ಕಣಜವೇ ಸರಿ. ಅರ್ಧಶತಮಾನಕ್ಕೂ ಮಿಕ್ಕಿದ ಹಿಂದಿನ ಕಥೆಗಳನ್ನು ಓದುತ್ತಾ ಸವಿಯುಣುವುದರ ಜೊತೆಜೊತೆಗೆ ಆಗಿನ ಕಾಲಮಾನದ ಕಥೆಗರರ ಮನಸ್ಥಿತಿ, ಕಥಾವಸ್ತು, ಸುತ್ತಮುತ್ತಲ ಪರಿಸರ, ನಿರೂಪಣಾ ಶೈಲಿ..ಈ ಎಲ್ಲದರ ಸ್ಥೂಲ ಪರಿಚಯ ದೊರಕುತ್ತದೆ.
"ಪ್ರಜಾವಾಣಿ" ತನ್ನ ಆರಂಭಿಕ ದಿನಗಳಿಂದಲೂ ಪ್ರತಿವರ್ಷ ...ಸಣ್ಣ ಕಥಾ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬರುವುದರ ಜೊತೆಗೆ ಹಲವು ಪ್ರತಿಭಾ ಬರಹಗಾರರನ್ನು ಪ್ರೋತ್ಸಾಹಿಸುತ್ತಲೂ, ಯುವ ಬರಹಗಾರರ, ಅದರಲ್ಲೂ ಮುಖ್ಯವಾಗಿ ಎಲೆಮರೆ ಕಾಯಿಯಂತಿದ್ದು ತನ್ನ ಬರವಣಿಗೆಗೆ ವೇದಿಕೆ ಸಿಗದವರ ಪಾಲಿನ ಆಶಾಕಿರಣದಂತೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು ಅವರನ್ನು ಸಾಹಿತ್ಯಿಕ ವಲಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತಲೂ, ಹೊಸಹೊಸ ಸಾಹಿತ್ಯದ ರಚನೆಯಲ್ಲಿ ತನ್ನ ಪಾಲಿನ ಅನೂಹ್ಯ ಕಾಣಿಕೆಯನ್ನು ಸಲ್ಲಿಸುತ್ತಲೂ ಬಂದಿರುವುದು ಶ್ಲಾಘನೀಯ ಮತ್ತು ಗಮನಾರ್ಹ. ವಿಶೇಷವೆಂದರೆ ಮೊದಮೊದಲು ಸ್ಪರ್ಧಿಗಳಾಗಿ ತಮ್ಮ ಕಥೆಯನ್ನು ಬರೆದವರು ಕಾಲಾನಂತರ ಅದೇ ಕಥಾತೀರ್ಪುಗಾರರಾಗಿದ್ದು. ಅಷ್ಟರ ಮಟ್ಟಿಗೆ "ಪ್ರಜಾವಾಣಿ" ತನ್ನ ಕೊಡುಗೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದೆ.
ಇದರಲ್ಲಿ ಒಟ್ಟೂ ಐವತ್ತು ಸಣ್ಣ ಕಥೆಗಳಿವೆ. ಐವತ್ತು ಕಥೆಗಾರರು ತಮ್ಮ ಕಲ್ಪನೆಯನ್ನಿಲ್ಲಿ ಸುಂದರ ಕಲಾಕೃತಿಗಳನ್ನಾಗಿಸಿದ್ದಾರೆ. ಈ ಕಥೆಗಳ ಹರವು ದೊಡ್ಡದು, ಎಲ್ಲವನ್ನು ಒಂದೇ ಪುಸ್ತಕದಲ್ಲಿ ಮುದ್ರಿಸದೆ ಮೂರು ಸಂಪುಟಗಳಲ್ಲಿ ತರುವ ಯೋಜನೆ "ಪ್ರಜಾವಾಣಿ"ಯದು. ಅದರ ಮೊದಲ ಸಂಪುಟವೇ ಈ "ಹೊನ್ನ ಕಣಜ". ಸಣ್ಣ ಕಥೆಗಳನ್ನು ಇಷ್ಟಪಡುವರು ಓದಲೇ ಬೇಕಾದ ಅಪರೂಪದ ಸಂಗ್ರಹಯೋಗ್ಯ ಕೃತಿ. ಇಲ್ಲಿರುವ ಒಂದೊಂದು ಕಥೆಗಳು ಸುಧೀರ್ಘ ಯೋಚನೆಯನ್ನು, ಭಾವಪರವಶತೆಯನ್ನು ಓದುಗನ ಮನದಲ್ಲಿ ಮೂಡಿಸುವುದಂತೂ ನಿಜ. ಹೆಚ್ಚಿಗೆ ಇದರ ಬಗ್ಗೆ ಹೇಳುವುದಕ್ಕಿಂತ ಓದಿ ನೋಡಿದಾಗ ಹೆಚ್ಚುಹೊಳಪು ನಮ್ಮಲ್ಲಿ ತರಿಸುತ್ತದೆ ಎನ್ನುವುದಷ್ಟೇ ಸತ್ಯ. ಮೇಲಾಗಿ ಐವತ್ತು ಕಥೆಗಳನ್ನು ಒಂದೇ ಚೌಕಟ್ಟಿನಲ್ಲಿ ಹಿಡಿದು ಕೂಡಿಸುವುದು ಸಾಧ್ಯವಾಗದ ಮಾತು. ಸುಮ್ಮನೇ ಓದುತ್ತಾ ಕಥೆಗಳಲ್ಲಿ ನಾವು ಲೀನವಾಗಬೇಕಷ್ಟೇ.
1. ಬಿ ಸಿ ರಾಮಚಂದ್ರ ಶರ್ಮ
2. ಸಮೇತನಹಳ್ಳಿ ರಾಮರಾಯ
3. ಪೂರ್ಣಚಂದ್ರ ತೇಜಸ್ವಿ
4. ಭಾರತೀಸುತ
5. ಸುಮತೀಂದ್ರ ನಾಡಿಗ
6. ವೀರಭದ್ರ
7. ಜಿ ಕೆ ಗೋವಿಂದರಾವ್
8. ಸುಧಾಕರ
9. ಪಿ ವಿ ನಂಜರಾಜ ಅರಸು
10. ಬೆಸಗರಗಳ್ಳಿ ರಾಮಣ್ಣ
11. ಪಿ ಲಂಕೇಶ್
12. ಟಿ ಎನ್ ಕೃಷ್ಣರಾಜು
13. ಶ್ರೀಕೃಷ್ಣ ಆಲನಹಳ್ಳಿ
14. ಗೋಪಾಲಕೃಷ್ಣ ಮಧ್ಯಸ್ಥ
15. ಶ್ರೀಕಾಂತ
16.ಕಮಲಾ ಸುಬ್ರಮಣ್ಯಂ
17. ಎಸ್ ದಿವಾಕರ್
18. ವೈದೇಹಿ
19. ಜಯಂತ ಕಾಯ್ಕಿಣಿ
20. ಕಾಳೇಗೌಡ ನಾಗವಾರ
21. ಬೋಳುವಾರು ಮಹಮದ್ ಕುಂಯಿ
22. ಕೆ ಟಿ ಗಟ್ಟಿ
23. ವಿವೇಕ ಶಾನಭಾಗ
24. ದೇಶಪಾಂಡೆ ಸುಬ್ಬರಾಯ
25. ಅಬ್ದುಲ್ ರಶೀದ್
26. ಅಶೋಕ ಹೆಗಡೆ
27. ಎಂ ಎಸ್ ಶ್ರೀರಾಮ್
28. ಮೊಗಳ್ಳಿ ಗಣೇಶ್
29. ಅಮರೇಶ ನುಗಡೋಣಿ
30. ರಾಜೇಂದ್ರ ಚಿನ್ನಿ
31. ಸಿ ಬಸವಲಿಂಗಯ್ಯ
32. ರಾಮಚಂದ್ರದೇವ
33. ಕಲಿಗಣನಾಥ ಗುಡದೂರು
34. ಜಯಶ್ರೀ ದೇಶಪಾಂಡೆ
35. ನಾಗವೇಣಿ ಹೊನ್ನಕಟ್ಟಿ
36. ಡಾ. ನಾ ಮೊಗಸಾಲೆ
37. ಬಿ ಎಲ್ ವೇಣು
38. ಮಂಜುನಾಥ್ ಲತಾ
39. ಅಲಕ ತೀರ್ಥಹಳ್ಳಿ
40. ಡಾ. ವಿನಯಾ
41. ಕಸ್ತೂರಿ ಎಸ್ ಬಾಯಿರಿ
42. ನಾಗಮಂಗಲ ಕೃಷ್ಣಮೂರ್ತಿ
43. ಕವಿತಾ ರೈ
44. ಟಿ ಕೆ ದಯಾನಂದ
45. ಅಲಕಾ ಕೆ
46. ಮಹಾಂತೇಶ ನವಲಕಲ್
47. ರಶ್ಮಿ ಕೆ ಎಂ
48. ಕೆ ಎ ಶಾಂತಿ
49. ಪಜ್ಞಾ ಮತ್ತಿಹಳ್ಳಿ
50. ರಾಜು ಹೆಗಡೆ
ನಮಸ್ಕಾರ
ಮೋಹನ್ ಕುಮಾರ್ ಡಿ ಎನ್
https://www.facebook.com/photo.php?fbid=1467976779957169&set=gm.1536931986374253&type=3&theater&ifg=1

No comments:
Post a Comment