ಶ್ರೀಕೃಷ್ಣ ಆಲನಹಳ್ಳಿಯವರ "ಕಾಡು"
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
ಹೋದ ವಾರ ಶ್ರೀಕೃಷ್ಣ ಆಲನಹಳ್ಳಿಯವರ "ಕಾಡು" ಪುಸ್ತಕವನ್ನೋದಿದೆ. ಕಾದಂಬರಿಯ ವಿಸ್ತೀರ್ಣ ಚಿಕ್ಕದಾದರೂ, ಅದರಲ್ಲಿರುವ ಪಾತ್ರಗಳ ಆಳಗಲ, ಪ್ರತಿ ಪಾತ್ರಕ್ಕೂ ಇರುವ ಧೀರ್ಘ ಸಂಕೀರ್ಣತೆ, ಪ್ರತಿ ಮನೆಯಲ್ಲಿ ಕಾಣುವ ಮನಸುಗಳ ಅಂತರ, ನಡುವೆಯೇ ಇದ್ದೂ ಇಲ್ಲದಿರುವಿಕೆ, ಪಾತಿವ್ರತ್ಯದ ಹೇರಿಕೆ, ಒಳಗೆ ನಾಲ್ಕು ಗೋಡೆಗಳ ಮಧ್ಯೆಯೇ ನಲುಗುವ ಮುಗ್ದ ಮನಸ್ಸಿನ ಜಾನಕಿಯ ವೇದನೆ, ನೋವು, ಆಕೆಯ ದುಗುಡ-ದುಮ್ಮಾನ, ತನಗೆ ಮಕ್ಕಳಾಗದಿರುವಿಕೆ, ಸಹೋದರಿಯ ಮಗನನ್ನೇ ತಾನು ಹೆತ್ತ ಕೂಸಿಗಿಂತ ಹೆಚ್ಚಾಗಿ ಸಾಕುವ ಆಕೆಯ ಕಾಳಜಿ, ಅವನ ಮೇಲಿರುವ ಪ್ರೀತಿ, ಮಮತೆ, ವಿಶ್ವಾಸ, ಆದರಣೆ, ಗಂಡ ಚಂದ್ರೇಗೌಡನ ಚಾಪಲ್ಯತೆ, ಆತನ ನ್ಯಾಯ ...ಪಂಚಾಯ್ತಿಯ ತಿಕ್ಕಲಾಟಗಳು, ಊರ ರಾಜಕೀಯ ಮತ್ತದರ ಒಳಪಿತೂರಿ, ಬಾಲಕ ಕಿಟ್ಟುವಿನ ವಯೋ ಸಜಹ ಕುತೂಹಲ, ಸುತ್ತಮುತ್ತಲ ಪರಿಸರದಲ್ಲಿನ ಆಗುಹೋಗುವಿನ ಸೂಕ್ಷ್ಮಗ್ರಹಿಕೆ, ಕಾಡಿನ ಬಗ್ಗೆ ಇರುವ ವಿವರಣೆ..... ಹೀಗೆ ಕಾದಂಬರಿಯ ಆವರಣ ಬಹಳ ಸೊಗಸಾಗಿ ತೆರೆದುಕೊಳ್ಳುತ್ತಾ ಇದೊಂದು ಉತ್ತಮ ಕೃತಿಯಾಗಿ ನಿಲ್ಲುತ್ತದೆ. ಒಂದು ಓಘದಲ್ಲಿ ನಡೆಯುತ್ತಿರುವ ಕಾದಂಬರಿಯು ಅಂತಿಮ ಹಂತಕ್ಕೆ ಬರುತ್ತಿದ್ದಂತೆ ತನ್ನ ಮಗ್ಗಲು ಬದಲಿಸಿ ಇಡೀ ಕಥೆಗೆ ಯಾರೂ ಉಹಿಸಲಾಗದ ತಿರುವು ತಂದಿರುವುದು ಆಲನಹಳ್ಳಿಯವರ ಅದ್ಬುತ ತಂತ್ರಗಾರಿಕೆಯಲ್ಲೊಂದು. ಹೊಸದಾಗಿ ಓದಲು ಆರಂಭಿಸಿದವರು ಇದನ್ನು ಓದಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಬರಲಡ್ಡಿಯಿಲ್ಲ ಎನ್ನುವುದು ನನ್ನ ಭಾವನೆ. ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ

No comments:
Post a Comment