" ನ ಭೂತೋ ನ ಭವಿಷ್ಯತ್ ನ ವರ್ತಮಾನಾ.."
ಕುಂ. ವಿ. ನನ್ನೊಳಗೆ ಆವರಿಸಿದ್ದಾಗಿದೆ.
ಎರಡು ಸಾಲು ಹೆಚ್ಚಿಗೆ ಬರೆದೆ. ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
https://www.facebook.com/groups/nanobbapustakapremi/permalink/1519301061470679/
ಈ ಕೃತಿಯ ಹಿಂದೆ ಸರಿಸುಮಾರು ಇಪ್ಪತ್ತು ವರ್ಷಗಳ ಪರಿಶ್ರಮವಿದೆ. ಕೃತಿಗೆ ಒಂದು ಆಯಾಮ ಕೊಡಬೇಕೆಂದರೆ ಹಲವಾರು ಬಗೆಯ ಓಡಾಟ, ಸಂಶೋಧನೆ, ನಿರಂತರ ಓದು, ವಿಷಯದ ಬಗ್ಗೆ ಸ್ಥೂಲ ಅಧ್ಯಯನ, ಕಥೆಯನ್ನು ನಡೆಸುವ ದಿಕ್ಕು, ಪಾತ್ರಗಳು ತಮ್ಮನ್ನು ತಾವು ತೆರೆದುಕೊಳ್ಳುತ್ತಾ ಓದುಗರನ್ನು ತನ್ನೊಳಗೆ ಎಳೆದು ತರುವ ಹಾಗೆ ಬರೆಯುವಿಕೆ... ಹೀಗೆ ಹಲವಾರು ಅಂಶಗಳು ಕೂಡಿದರೆ ಒಂದೆರೆಡು ಆಯಾಮ ನೀಡುವಂತಹ ಕೃತಿ ರಚನೆ ಬರಹಗಾರನಿಗೆ ಸಾಧ್ಯವಾಗುತ್ತದೆ.
ಆದರೆ ಒಂದೇ ಕೃತಿಯಲ್ಲಿ ಐತಿಹಾಸಿಕ, ಚಾರಿತ್ರಿಕ ಮತ್ತು ಸಾಮಾಜಿಕ ಆಯಾಮವನ್ನು ತರುವುದು ಅಷ್ಟು ಸುಲಭ ಸಾಧ್ಯವಲ್ಲ. ಘಟನೆಗಳನ್ನು ಪೋಣಿಸುವಾಗ ಬಹಳ ಎಚ್ಚರದಿಂದ ಬರೆಯಬೇಕು. ಅದರಲ್ಲಿ ಅನುಸಾರವಿರಬೇಕು, ಒಂದಕ್ಕೊಂದು ಹೊಂದುವಂತಿರಬೇಕು, ಎಲ್ಲೂ ಘಟನೆಗಳ ಅದಲು ಬದಲಾವಣೆ ಇರಕೂಡದು, ಓದುಗರನ್ನು ಸೂಜಿಗಲ್ಲಿನಂತೆ ಹಿಡಿದು ಎಲ್ಲೂ ಬೇಸರವಾಗದಂತೆ ಬರೆಯಬಲ್ಲ ಚಾಕಚಕ್ಯತೆ ಇರಬೇಕು. ಆ ಅನುಭಾವಕ್ಕೆ ನಮ್ಮನ್ನು ಈಡು ಮಾಡುವುದು ಬರಹಗಾರನ ಒಟ್ಟೂ ಪರಿಶ್ರಮ, ವಿಷಯ ಪಾಂಡಿತ್ಯ, ಹೇಳಹೊರಟಿರುವ ವಿಷಯದಲ್ಲಿ ತಾನು ಸಾಧಿಸಿರುವ ಪ್ರಬುದ್ದತೆಯ ಮೇಲೆ ಅವಲಂಬಿಸಿರುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬರಹಗಾರನ ಕಲ್ಪನಾಶಕ್ತಿ ಮತ್ತದರ ವಿಸ್ತೀರ್ಣತೆ ವಿಶಾಲವಾಗಿರಬೇಕು. ಬಹುಶಃ ಇದಕ್ಕೇ ಹೇಳುತ್ತಾರೆ, ಜ್ಞಾನಕ್ಕಿಂತ ಕಲ್ಪನೆ ದೊಡ್ಡದು ಎಂದು. ನೀವು ಈ ಕಾದಂಬರಿಯನ್ನು ಪೂರ್ಣವಾಗಿ ಓದುವ ಮೊದಲೇ ಈ ವಿಷಯ ನಿಮ್ಮ ಗಮನಕ್ಕೆ ಬರುತ್ತದೆ, ಓದುತ್ತಾ ಓದುತ್ತಾ ಹೋದಂತೆ ಮೊದಲಿಗಿಂತ ಹೆಚ್ಚು ಕಲ್ಪನಾಲೋಕದ ವಿಲಾಸದಲ್ಲಿ ನಿಮ್ಮನ್ನು ತೂರಿ ಓದುವ ಹೊಸ ತೆರನಾದ ಅನುಭವ ನಿಮ್ಮಲ್ಲಿ ತೆರೆದುಕೊಂಡು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.
ಹೀಗೆ ತನ್ನದೆನ್ನುವ ಎಲ್ಲವನ್ನೂ ಅಮೃತಧಾರೆ ಎರಕಹೊಯ್ದು ಸವಿ ಉಣಬಡಿಸಿರುವ ಮಹಾನ್ ಕಾದಂಬರಿಯೇ ಕುಂ. ವೀ. ಅವರ ಮಹದ್ಗ್ರುತಿ "ಅರಮನೆ".
ಇದನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೆ, ಅರ್ಥಮಾಡಿಕೊಂಡು ಅರಗಿಸುಕೊಳ್ಳುವುದಕ್ಕೆ ನಿಶ್ಚಲ ಶಾಂತಿ ಮತ್ತು ಅಪಾರ ತಾಳ್ಮೆ ಬೇಕು. ಏಕೆಂದರೆ ಎಲ್ಲ ಕಥೆ ಕಾದಂಬರಿಯಂತೆ ಇದು ನಮ್ಮನ್ನು ಓದಿಸಿಕೊಂಡು ಹೋಗುವುದಿಲ್ಲ. ಆತುರಕ್ಕೆ ಬಿದ್ದು ಓದಿದರೆ ಅರ್ಥವೇ ಆಗುವುದಿಲ್ಲ. ಒಂದೇ ಪಟ್ಟಿಗೆ ಹಿಡಿತಕ್ಕೆ ಸಿಗುವುದಿಲ್ಲ. ಕಬ್ಬಿಣದ ಕಡಲೆ ಎನಿಸಿದರೂ ಓದುವವನ ಶಾಂತಿ ತಾಳ್ಮೆಗಳು ಈ ಕಾದಂಬರಿಯನ್ನು ಓದುವ ಪರೀಕ್ಷೆಗೊಳಪಟ್ಟು ಅದರಲ್ಲಿ ಗೆದ್ದರೆ (ಕಡೇ ಪಕ್ಷ ಆರಂಭಿಕ ಪುಟಗಳಷ್ಟಾದರೂ) ಇದು ನಿಮ್ಮನ್ನು ಮುಂದೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಆರಂಭಿಕ ಹದವನ್ನಷ್ಟೇ ನಾವು ಸಾಧಿಸಬೇಕಿರುವುದು.
ಏಕೆಂದರೆ ಇದು..
ಒಂದೆರೆಡು ಪಾತ್ರವಲ್ಲ, ಒಂದೆರೆಡು ವ್ಯಕ್ತಿಗಳ ಜೀವನವಲ್ಲ, ಒಂದೆರೆಡು ಘಟನೆಯಲ್ಲ, ಒಂದೆರೆಡು ಹಿನ್ನೆಲೆಯಲ್ಲ, ಒಂದೆರೆಡು ಕಥೆಯಲ್ಲ, ಒಂದೆರೆಡು ಉಪಕಥೆಯಲ್ಲ, ಒಂದೆರೆಡು ಸನ್ನಿವೇಶವಲ್ಲ, ಒಂದೆರೆಡು ಜಾಗವಲ್ಲ, ಒಂದೆರೆಡು ಕಾಲಘಟ್ಟವಲ್ಲ, ಒಂದೆರೆಡು ನಂಬಿಕೆಯಲ್ಲ, ಒಂದೆರೆಡು ಕುರುಡು ನಂಬಿಕೆಯಲ್ಲ, ಒಂದೆರೆಡು ಆಚಾರ ವಿಚಾರವಲ್ಲ, ಒಂದೆರೆಡು ರೀತಿ ರಿವಾಜುವಲ್ಲ, ಒಂದೆರೆಡು ನಡೆನುಡಿಯಲ್ಲ, ಒಂದೆರೆಡು ಕಿರುಪರಿಚಯವಲ್ಲ, ಒಂದೆರೆಡು ಧೀರ್ಘ ಪರಿಚಯವಲ್ಲ, ಒಂದೆರೆಡು ವಿಷಯಗಳ ಪರಾಮರ್ಶೆಯಲ್ಲ, ಒಂದೆರೆಡು ನೋಟಗಳ ವಿಮರ್ಶೆಯಲ್ಲ, ಒಂದೆರೆಡು ಅವಾಸ್ತವಿಕತೆಯ ಸಂಘರ್ಷವಲ್ಲ, ಒಂದೆರೆಡು ವಾಸ್ತವಿಕದ ವಿಡಂಬನೆಯಲ್ಲ, ಒಂದೆರೆಡು ರಾಜಮನೆತಗಳ ಅಧಿಕಾರಿಶಾಹಿತ್ವವಲ್ಲ, ಒಂದೆರೆಡು ಪಾಳೇಪಟ್ಟುಗಾರರ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಕರುಣಜನಕ ಕಥೆಯಲ್ಲ, ಒಂದೆರೆಡು ಸಾಂಮಂತ ಮಾಂಡಲೀಕರ ಆಡಳಿತವಲ್ಲ, ಒಂದೆರೆಡು ಹೆಂಗಸರ ದೌರ್ಜನ್ಯದ ಆಲಾಪನೆಯಲ್ಲ, ಒಂದೆರೆಡು ಗಂಡಸರ ಕೆಲಸಕ್ಕೆ ಬಾರದ ಬರುವ ಹೆಳವನಕಟ್ಟೆ ಪುರಾಣವಲ್ಲ, ಒಂದೆರೆಡು ತಂದೆತಾಯಿಗಳ ಅಣ್ಣತಮ್ಮಅಕ್ಕರ ಸವಿ ಬಾಂಧವ್ಯವಲ್ಲ, ಒಂದೆರೆಡು ಸಂಬಂಧಿ, ಸ್ನೇಹಿತರ ನಯವಂಚಕತೆಯಲ್ಲ, ಒಂದೆರೆಡು ಜೋಡಿ ಪ್ರೇಮಿಗಳ ಗುಪ್ತ ಗುಪ್ತ ಸರಸವಲ್ಲ, ಒಂದೆರೆಡು ಜೊತೆ ಗಂಡಹೆಂಡಿರ ಮನೋದೈಹಿಕ ವಿಕಸನೆಯಲ್ಲ, ಒಂದೆರೆಡು ಕೋಮುಗಳ ಗಲಭೆಯಲ್ಲ, ಒಂದೆರೆಡು ವಿದ್ಯೆಯುಳ್ಳವರ ಅಪರೂಪದ ವಿವರಣೆಯಲ್ಲ, ಒಂದೆರೆಡು ವಿಫಲ ದಂಡಯಾತ್ರೆಗಳ ವಿವರಗಳಲ್ಲ, ಒಂದೆರೆಡು ಸಾಮ್ರಾಜ್ಯ ವಿಸ್ತರಣೆಯ ಹಪಹಪಿತನವಲ್ಲ, ಒಂದೆರೆಡು ವಸಾಹತು ಶಾಹಿಗಳ ಆರಂಭವಲ್ಲ, ಒಂದೆರೆಡು ಸಂಸ್ಕೃತಿಗಳ ಪುನರ್ಮಿನಲವಲ್ಲ, ಒಂದೆರೆಡು ಅಸಾಂಸ್ಕೃತಿಕ ನೆಲೆಗಳ ವೈಭವೀಕರಣವಲ್ಲ, ಒಂದೆರೆಡು ಹೊಸ-ಹಳೆಯದರ ನಡುವಿನ ವೈರತ್ವವಲ್ಲ, ಒಂದೆರೆಡು ಅಂತರಂಗ ಬಹಿರಂಗಗಳ ನಯ ನಾಜೂಕಲ್ಲ, ಒಂದೆರೆಡು ಅರಮನೆಗಳ ವರ್ಣನೆಯಲ್ಲ, ಒಂದೆರೆಡು ಅರಮನೆಗಳ ಹೀನ ಸ್ಥಿತಿಗೆ ಕಾರಣ ಒಂದೆರಡಲ್ಲ, ಒಂದೆರೆಡು ಅಧಿಕಾರ ಉಂಡು ಮೆರೆದವರ ದೈನೇಸಿ ಸ್ಥಿತಿಯಲ್ಲ, ಒಂದೆರೆಡು ಅದೇ ಅಧಿಕಾರಕ್ಕಾಗಿ ಆಳುವವರ ಕಂಬನಿಯಲ್ಲ, ಒಂದೆರೆಡು ಸಿಂಹಾಸನಕ್ಕಾಗಿ ತಲೆಗಳುರುಳಿಸಿದ ಕಟುಕರ ನಿರ್ದಯತೆಯಲ್ಲ, ಒಂದೆರೆಡು ಸಂಸ್ಥಾನಗಳ ಅರಾಜಕತೆಯಲ್ಲ, ಒಂದೆರೆಡು ಗ್ರಾಮಗಳ ಜನರ ಅಭದ್ರ ಜೀವನದ ಕನಸುಗಳಲ್ಲ, ಒಂದೆರೆಡು ಕನಸು ಕಂಡವರ ಅವಿರತ ಕಾರ್ಯಸಿದ್ದಿ ಯಶೋಗಾಥೆಯಲ್ಲ, ಒಂದೆರೆಡು ಜನಾನುರಾಗಿ ಕೆಲಸ ಮಾಡಿದ ನಿಷ್ಠಾವಂತರ ನರಳುವಿಕೆಯಲ್ಲ, ಒಂದೆರೆಡು ಬಾರಿ ಗಳ ಇರಿಯುವ ಮಂದಿಯ ಕ್ರೂರತ್ವವಲ್ಲ, ಒಂದೆರೆಡು ತಣ್ಣನೆಯ ಕ್ರೌರ್ಯದ ಪರಮಾವಧಿಯಲ್ಲ, ಒಂದೆರೆಡು ಸೇಡುಗಳ ಬೆನ್ನತ್ತುವಿಕೆಯಲ್ಲ, ಒಂದೆರೆಡು ಔದಾರ್ಯದ ಉದಾಹರಣೆಯ ವಿವರಣೆಯಲ್ಲ, ಒಂದೆರೆಡು ಕಟುತ್ವದ ಕರುಳು ಹಿಂಡುವಿಕೆಯಲ್ಲ, ಒಂದೆರೆಡು ದೇಶಭಕ್ತಿಯ ಸೂಫಿ ಗಾಯನವಲ್ಲ,
ಒಂದೆರೆಡು ಜನಮನ್ನಣೆಯ ತಾರಕ ಸಂಗೀತವಲ್ಲ, ಒಂದೆರೆಡು ಅಧಿಕಾರಶಾಹಿಗಳ ಬಿಸಿರಕ್ತ ಕುಡಿಯುವಿಕೆಯ ವಿಕೃತವಲ್ಲ, ಒಂದೆರೆಡು ಅಧಿಕಾರಗಳ ನಿಷ್ಠ ಸೇವೆ ಉಂಡ ನಾಡ ಸುಕೃತವಲ್ಲ, ಒಂದೆರೆಡು ಅಧಿಕಾರತ್ವದ ಹಪಹಪಿ ಗರಿಷ್ಠ ಮಟ್ಟ ತಲುಪಿದರ ಸಂಕೇತವಲ್ಲ, ಒಂದೆರೆಡು ಕಿರಾತಕರ ಒಡಲೊಳಗಿನ ನಿರ್ಭಾಗ್ಯ ನಿಟ್ಟುಸಿರಲ್ಲ, ಒಂದೆರೆಡು ಯುದ್ಧದಾಹಿ ಪಡೆಯ ಅಗೋಚರ ಆಗುಂತುಕತನವಲ್ಲ, ಒಂದೆರೆಡು ರಕ್ತಪಿಪಾಸುಗಳ ಭಯಂಕರ ರಣೋತ್ಸಾಹವಲ್ಲ, ಒಂದೆರೆಡು ಶಾಂತಾವಧೂತರ ರಣರಹಿತ ಸಮಾಜ ನಿರ್ಮಾಣದ ಏಗುವಿಕೆಯಲ್ಲ, ಒಂದೆರೆಡು ಕಲುಷಿತ ಮನಸುಗಳ ಒಡೆದು ಆಳುವ ಹಾಳು ಮಾಡುವ ಕುತಂತ್ರವಲ್ಲ, ಒಂದೆರೆಡು ಅಮಾಯಕ ಜನರ ಮೇಲಾಗುವ ಆಕ್ರಮಣವಲ್ಲ, ಒಂದೆರೆಡು ಮುಗ್ದ ಮನಸ್ಸುಗಳ ಮೇಲಾಗುವ ಅತ್ಯಾಚಾರವಲ್ಲ, ಒಂದೆರೆಡು ಸವಿಗನಸುಗಳ ಕಗ್ಗೊಲೆಯಲ್ಲ, ಒಂದೆರೆಡು ಮನಸ್ಸುಗಳ ಪರಸ್ಪರ ವಿರೋಧಾಭಾಸವಲ್ಲ, ಒಂದೆರೆಡು ಕನಸ್ಸುಗಳ ಬೆಸೆಯುವಿಕೆಯಲ್ಲ, ಒಂದೆರೆಡು ಊರುಗಳ ನಿಟ್ಟುಸಿರಲ್ಲ, ಒಂದೆರೆಡು ಭಟ್ಟಂಗಿಗಳ ದೊಂಬರಾಟವಲ್ಲ, ಒಂದೆರೆಡು ಬುಡಕಟ್ಟುಗಳ ಕಳೆಗುಂದಿದ ಕಲಾಹೀನತೆಯಲ್ಲ, ಒಂದೆರೆಡು ಜಾನಪದ ಗೀಗೀಪದ ಡೋಲು ಕಂಸಾಳೆ ಕುಣಿತಗಾರರ ಜೀವನೋತ್ಸಾಹವಲ್ಲ, ಒಂದೆರೆಡು ತಲೆಮಾರಿನ ಕಾಗಕ್ಕ ಗುಬ್ಬಕ್ಕಗಳ ವ್ಯಸನತೆ ವ್ಯಾಕುಲತೆಯಲ್ಲ, ಒಂದೆರೆಡು ಯುವಜನಾಂಗದ ಸಾವಿರ ಕನಸ್ಸುಗಳ ಸುಂದರ ಹೂಮಾಲೆಯಲ್ಲ, ಒಂದೆರೆಡು ಸೌಂದರ್ಯೋಪಾಸನೆಯ ಹಲವು ನಮೂನೆಗಳಲ್ಲ, ಒಂದೆರೆಡು ಭಗ್ನ ಪ್ರೇಮಿಗಳ ಒಡೆದ ಹೃದಯದ ಆರ್ತನಾದವಲ್ಲ, ಒಂದೆರೆಡು ಪುರಾಣಗಳ ಬಂಡಾರವಲ್ಲ, ಒಂದೆರೆಡು ಕಲಾವಿದರ ಸಂಗಮವಲ್ಲ, ಒಂದೆರೆಡು ಶಾಸ್ತ್ರಾರಚನೆಗಳ ಸಮ್ಮಿಲನವಲ್ಲ, ಒಂದೆರೆಡು ಕೋಮುಗಳ ತಾರ್ಕಿಕ ಅಂತ್ಯವಲ್ಲ, ಒಂದೆರೆಡು ಕ್ರೌರ್ಯ ಹುಟ್ಟುವ ಸಾಯುವ ಸಾಯಿಸುವ ಅಮೂರ್ತ ಘಳಿಗೆಗಳಲ್ಲ, ಒಂದೆರೆಡು ಗುಂಪುಗಳ ಅಸಹಾಯಕತೆಯಲ್ಲ, ಒಂದೆರೆಡು ಮನೆತನಗಳ ಕಟ್ಟೆಪುರಾಣವಲ್ಲ, ಒಂದೆರೆಡು ಜಾತಿ ಮತಗಳ ಕಲಸೊಮೇಗರವಲ್ಲ, ಒಂದೆರೆಡು ಅಂತಸ್ತಿನ ಪ್ರತಿಷ್ಠತೆಯಲ್ಲ, ಒಂದೆರೆಡು ಸಾಮಾನ್ಯ ಸಂಗತಿಗಳಲ್ಲ, ಒಂದೆರೆಡು ಅಸಾಮಾನ್ಯ ಸಂಗತಿಗಳಲ್ಲ, ಒಂದೆರೆಡು ಹಿನ್ನೆಲೆಯಲ್ಲ, ಒಂದೆರೆಡು ಮುನ್ನೆಲೆಯಲ್ಲ, ಒಂದೆರೆಡು ವಿದ್ಯಾಮಾನಗಳಲ್ಲ, ಒಂದೆರೆಡು ಸವಿಸ್ತಾರವಲ್ಲ, ಒಂದೆರೆಡು ಸಂಕುಚಿತವಲ್ಲ, ಒಂದೆರೆಡು ಜನಜೀವನವಲ್ಲ, ಒಂದೆರೆಡು ಲೌಕಿಕವಲ್ಲ, ಒಂದೆರೆಡು ಅಲೌಕಿಕವಲ್ಲ, ಒಂದೆರೆಡು ನಿಟುಕದಿರುವ ಭೂತಮಾನವಲ್ಲ, ಒಂದೆರೆಡು ಕೈಗೂಡದಿರುವ ವರ್ತಮಾನದ ವರ್ತನೆಯಲ್ಲ, ಒಂದೆರೆಡು ಭವಿಷ್ಯತ್ ದೈವೀಕತೆಯಲ್ಲ.... ನ ಭೂತೋ ನ ಭವಿಷ್ಯತ್ ನ ವರ್ತಮಾನಾ..
"ಅರಮನೆ" ಈ ಮೇಲ್ಗಾಣಿಸಿದ ಎಲ್ಲದರ ಅನೂಹ್ಯ ಸಂಮ್ಮಿಶ್ರಣ. ಈ ಕಾದಂಬರಿಯ ಕಥಾವಸ್ತು ನಡೆಯುವುದು ಸ್ವಾತಂತ್ರ್ಯಪೂರ್ವದಲ್ಲಿ. ಸುಮಾರು 567 ಪುಟಗಳಷ್ಟಿರುವ ಬೃಹತ್ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕುಂ ವೀ ಅವರ ಹೊಸ ಭಾಷಾ ಪಾಂಡಿತ್ಯಕ್ಕೆ ಮನಸೋಲುವಿರಿ. ನಮ್ಮ ಹಿಂದಿನ ಜನಾಂಗದ ಸಮಗ್ರ ದರ್ಶನದ ಜೊತೆ, ಸ್ವಾತಂತ್ರ್ಯ ಪೂರ್ವೇತಿಹಾಸ, ವಸಾಹತುಶಾಹಿ, ಅಪರೂಪ ಮತ್ತು ಅನುಕರಿಸಲಾಧ್ಯವಾದ ಅವರ ಜೀವನ ಶೈಲಿ, ಮಾನವನ ಮೂಲಭೂತ ನಡಾವಳಿಗಳ ಸ್ಥೂಲ ಪರಿಚಯವಾಗುವುದರ ಜೊತೆ ಜ್ಞಾನಕ್ಕಿಂತ ಕಲ್ಪನೆ ದೊಡ್ಡದು ಎನ್ನುವುದರ ಸಾರ್ವಕಾಲಿಕ ಸತ್ಯದರ್ಶನವಾಗುತ್ತದೆ. ಇದರ ಕೂಲಂಕುಷ ಕಥೆ, ಕಥಾ ವಸ್ತು ಹೇಳುವುದು ಯಾರ ಕೈಯ್ಯಿಂದಲೂ ಸಾಧ್ಯವಿಲ್ಲ. ಮತ್ತೊಮ್ಮೆ ಕೂತರೂ ಸ್ವತಃ ಕುಂ ವೀ ಅವರಿಂದಲೂ! ಹಾಗಿದೆ ಕಾದಂಬರಿ. ಇದನ್ನು ಓದುವವರೆಗೂ ನಾನು ನಾನಾಗಿರಲಿಲ್ಲ ಅಂತಷ್ಟೇ ಹೇಳಬಯಸುತ್ತೇನೆ. ಅದರೊಳಗಿನ ನಶೆ ನನ್ನನ್ನು ಎಂದು ಬಿಡುತ್ತದೋ ಕಾಣೆ. ವಿವರಿಸಲಾಗದ ವಿಪ್ಲವದಲ್ಲಿ ನನ್ನ ಮನಸ್ಸು ಸಮಾಧಿಯಾಗಿದೆ.
ಕುಂ. ವಿ. ನನ್ನೊಳಗೆ ಆವರಿಸಿದ್ದಾಗಿದೆ.
ಎರಡು ಸಾಲು ಹೆಚ್ಚಿಗೆ ಬರೆದೆ. ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
https://www.facebook.com/groups/nanobbapustakapremi/permalink/1519301061470679/

No comments:
Post a Comment